Hide Main content block

ಸಂಯೋಜನಾ ಪ್ರಕ್ರಿಯೆಗೆ ಸಂಬಂದಿಸಿದಂತೆ ಸಿ.ಡಿ.ಸಿ. ವಿಭಾಗದ ಕಾರ್ಯಚಟುವಟಿಕೆಗಳು


• ಸಂಯೋಜನೆ ಅಧಿಸೂಚನೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸುವುದು.
• ಅಧಿಸೂಚನೆಯನ್ನು 3 ಕನ್ನಡ, 1 ಇಂಗ್ಲೀಷ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
• ಸಂಯೋಜನೆಗೆ ಸಂಬಂಧಿಸಿದ, ವಿವಿಧ ಬಗೆಯ ಸಂಯೋಜನಾ ಅರ್ಜಿ, ಸಂಯೋಜನೆಗೆ ಸಂಬಂಧಿಸಿದ ನಿಯಮಾವಳಿ, ಶುಲ್ಕಗಳ ಮಾಹಿತಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವೆಬ್ ಸೈಟಿನಲ್ಲಿ ಅಳವಡಿಸಲಾಗಿರುತ್ತದೆ. (www.rcub.ac.in)
• ಸಂಯೋಜನೆಯ ಅಧಿಸೂಚನೆಯು, ಅರ್ಜಿ ವಿಧಾನ , ನೀಗದಿಪಡಿಸಿದ ದಿನಾಂಕಗಳ ವಿವರವನ್ನು ಒಳಗೊಂಡಿರುತ್ತದೆ.
• ಸಂಸ್ಥೆ/ಮಹಾವಿದ್ಯಾಲಯಗಳಿಂದ ವಿವಿಧ ಬಗೆಯ ಸಂಯೋಜನೆಯ ಅರ್ಜಿಯನ್ನು ಸ್ವಿಕರಿಸಲಾಗುವುದು.
• ಮಹಾವಿದ್ಯಾಲಯದವರು ಸಲ್ಲಿಸಿದ ಸಂಯೋಜನಾ ಅರ್ಜಿಯನ್ನು ಪರಿಶೀಲಿಸುವುದು.
• ಮಹಾವಿದ್ಯಾಲಯದವರು ಸಲ್ಲಿಸಿದ ಅರ್ಜಿಯನ್ನು ರಿಜಿಸ್ಟರನಲ್ಲಿ ದಾಖಲಿಸಲಾಗುವುದು. (ಮಹಾವಿದ್ಯಾಲಯದ ಹೆಸರು, ಕೋಡ ಸಂಖ್ಯೆ, ಸಂಯೋಜನೆಗೆ ಅರ್ಜಿ ಸಲ್ಲಿಸಿದ ಕೋರ್ಸಗಳ ವಿವಿರ, ಸಂಯೋಜನೆ ವಿಧ, ಶುಲ್ಕಗಳ ವಿವರ, ಭರಿಸಿದ ದಿನಾಂಕ, ಚಲನ್ ನಂ. ಇತ್ಯಾದಿ)
• ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಸಂಯೋಜನೆಗೆ ಅರ್ಜಿ ಸಲ್ಲಿಸಿದ ಮಹಾವಿದ್ಯಾಲಯಗಳ ಅರ್ಜಿಯನ್ನು ಸಿಂಡಿಕೇಟ್ ಸಭೆಯ ಪರಿಶೀನಲೆಗಾಗಿ ಮಂಡಿಸಲಾಗುವುದು.
• ಮಹಾವಿದ್ಯಾಲಯಗಳ ಪರಿಶೀಲನೆಗಾಗಿ ತನಿಖಾ ಸಮಿತಿಗಳನ್ನು ರಚಿಸಲಾಗುವುದು.
• ಸಮಿತಿಯಲ್ಲಿ ಹಿರಿಯ ಪ್ರಾಧ್ಯಾಪಕರನ್ನು ಅಧ್ಯಕ್ಷರನ್ನಾಗಿ, ಸಹ ಪ್ರಾಧ್ಯಾಪಕರನ್ನೊಳಗೊಂಡ ಮೂರು ಅಥವಾ ನಾಲ್ಕು ಜನರ ಸಮಿತಿಯನ್ನು ರಚಿಸಿ, ಸಮಿತಿಯಲ್ಲಿ ಒಬ್ಬರು ಪ.ಜಾ/ಪ.ಪಂ. ಇವರನ್ನು ನೇಮಿಸಲಾಗುವುದು.
• ಸಮಿತಿಯಗಳನ್ನು ರಚಿಸಿದ ನಂತರ ತಾಲೂಕುವಾರು ಮಹಾವಿದ್ಯಾಲಯಗಳ ಪರಿಶಿಲನೆಗೆ ಕಳುಹಿಸಲಾಗುವುದು.
• ಸಮಿತಿಯವರಿಗೆ, ಭೇಟಿ ನೀಡಬೇಕಾದ ಮಹಾವಿದ್ಯಾಲಯಗಳ ವೇಳಾಪಟ್ಟಿ, ಕೋರ್ಸ ಮತ್ತು ಸಂಯೋಜನೆ ವಿಧವನ್ನು ಒಳಗೊಂಡಿರುವ ಪತ್ರವನ್ನು ನೀಡಲಾಗುವುದು ಮತ್ತು ಮಹಾವಿದ್ಯಾಲಯಕ್ಕೆ ಸಮಿತಿಯು ಭೇಟಿ ನೀಡುವ ದಿನಾಂಕದ ವಿವರ ಇರುವ ಪತ್ರವನ್ನು ಕಳುಹಿಸಲಾಗುವುದು.
• ಸಮಿತಿಯವರಿಗೆ, ಮಹಾವಿದ್ಯಾಲಯಗಳ ಭೇಟಿಗಾಗಿ ಸಿಡಿಸಿ ವಿಭಾಗದಿಂದ ವಾಹನವನ್ನು ಪೂರೈಸಲಾಗುವುದು.
• ಸಮಿತಿಯವರಿಂದ, ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಸಿರುವ ವರದಿಯನ್ನು ಸ್ವಿಕರಿಸಲಾಗುವುದು.
• ಸದರಿ ವರದಿಗಳನ್ನು ಪರಿಶಿಲಿಸಿ ಶಿಪಾರಸ್ಸು ಮಾಡಿರುವ ಮತ್ತು ಶಿಫಾರಸ್ಸು ಮಾಡದೇ ಇರುವ ವರದಿಗಳನ್ನು ಪ್ರತ್ಯೆಕಿಸಲಾಗುವುದು.
• ಸಮಿತಿಯವರು ನೀಡಿರುವ ವರದಿಗಳನ್ನು ಮೋದಲು ವಿದ್ಯಾವಿಷಯಕ ಪರಿಷತ್ ಸಭೆಗೆ ನಂತರ ಸಿಂಡಿಕೇಟ್ ಸಭೆಗೆ ಮಂಡಿಸಲಾಗುವುದು.
• ಸರಕಾರದಿಂದ ಮಂಜೂರಾತಿ ಪಡೆಯಬೇಕಾದಂಥ ವಿವಿಧ ಬಗೆಯ ಸಂಯೋಜನೆಗಳಾದ, ಹೊಸ ಮಹಾವಿದ್ಯಾಲಯದ ಸಂಯೋಜನೆ, ಹೊಸ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸಗಳ ಸಂಯೋಜನೆ, ಹೊಸ ಭಾಷಾ ಮತ್ತು ಮೂಲ ವಿಷಯಗಳ ಸಂಯೋಜನೆ, ಶಾಶ್ವತ ಸಂಯೋಜನೆ ಹಾಗೂ ಸ್ನಾತಕೊತ್ತರ/ವೃತ್ತಿಪರ ಸ್ನಾತ ಕೋರ್ಸಗಳ ಪ್ರವೇಶ ಮಿತಿಹೆಚ್ಚಳದ ಪ್ರಸ್ತಾವನೆಯನ್ನು ಸಿದ್ದಪಡಿಸಿ ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ ಸಲ್ಲಿಸಲಾಗುವುದು.
• ವಿಶ್ವವಿದ್ಯಾಲಯದ ಮಟ್ಟದಲ್ಲಿ ನೀಡಬೇಕಾದಂಥ ಮುಂದುವರಿಕೆ/ವಿಸ್ತರಣೆಗೆ ಮತ್ತು ಪ್ರವೃಶ ಮಿತಿ ಹೆಚ್ಚಳಕ್ಕಾಗಿ ಅರ್ಜಿ ಸಲ್ಲಿಸಿದಂಥ ಮಹಾವಿದ್ಯಾಲಯಗಳಿಗೆ ತನಿಖಾ ಸಮಿತಿಯವರು ನೀಡಿರುವ ವರದಿಯಲ್ಲಿ ಕಾಣಿಸಿರುವ ಷರತುಗಳನ್ನು ಪೂರೈಸುವ ಕುರಿತಾಗಿ ಮಹಾವಿದ್ಯಾಲಯಗಳಿಗೆ ಪ್ರವನ್ನು ಕಳುಹಿಸಲಾಗುವುದು.
• ಮಹಾವಿದ್ಯಾಲಯದವರು ಷರತ್ತುಗಳನ್ನು ಪೂರೈಸಿರುವ ಕುರಿತಾಗಿ ಸಲ್ಲಿಸಿದ ಅನುಪಾಲನಾ ವರದಿಯನ್ನು ಪರಿಶಿಲಿಸಿ ಮಹಾವಿದ್ಯಾಲಯಗಳಿಗೆ ಮುಂದುವರಿಕೆ/ವಿಸ್ತರಣೆಯ ಅಧಿಸೂಚನೆಯನ್ನು ಮತ್ತು ಪ್ರವೇಶ ಮಿತಿಹೆಚ್ಚಳದ ಪತ್ರವನ್ನು ಕಳುಹಿಸಲು ಕ್ರಮಕೈಗೊಳ್ಳಲಾಗುವುದು.

ಇತರೆ ಕಾರ್ಯಚಟುವಟಿಕೆಗಳು.

• ಸರಕಾರದ ನಿರ್ದೇಶನದಂತೆ ಸಂಯೋಜನೆಯ ಪ್ರಕ್ರಿಯೆಯನ್ನು ಅಂಜರ್ತಾಲದ ಮುಖಾಂತರ ಕೈಗೊಳ್ಳುವುದು.
• ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರಿಗೆ ಮತ್ತು ಬೋಧಕ ಸಿಬ್ಬಂದಿಯವರಿಗೆ ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿ ಅವರು ಸಲ್ಲಿಸುತ್ತಿರುವ ಹುದ್ದೆಗೆ ಅನುಮೋದನೆ ನೀಡುವುದು.
• ಮಹಾವಿದ್ಯಾಲಯದ ಸ್ಥಗಿತ, ವೀಲಿನಗೊಳಿಸುವುದು, ಸ್ಥಳಾಂತರಿಸುವುದು ಮತ್ತು ಹೆಸರು ಬದಲಾವಣೆಗೆ ಸಂಬಂಧಿಸಿದ ಕಾರ್ಯಕೈಗೊಳ್ಳುವುದು.
• ಮಹಾವಿದ್ಯಾಲಯದವರು 2ಎಫ್ ಮತ್ತು 12ಬಿ ಮಾನ್ಯತೆಯನ್ನು ಪಡೆಯುವ ಸಲುವಾಗಿ ಸಲ್ಲಿಸಿದ ಪ್ರಸ್ತಾವನೆಯನ್ನು ಮುಂದಿನ ಕ್ರಮಕ್ಕಾಗಿ ಯುಜಿಸಿ ನವದೆಹಲಿ/ಬೆಂಗಳೂರು ಇವರಿಗೆ ಕಳುಹಿಸಲಾಗುವುದು.
• ಮಹಾವಿದ್ಯಾಲಯದವರು ಸಲ್ಲಿಸಿದ ಎಂ.ಆರ್.ಪಿ. ಪ್ರಸ್ತಾವನೆ, ಕಟ್ಟಡ ಅಭಿವೃದ್ಧಿ ಪ್ರಸ್ತಾವನೆ, ಮಹಿಳಾ ವಸತಿ ನಿಲಯ ಕಟ್ಟಡದ ಪ್ರಸ್ತಾವನೆ ಮತ್ತು ಸಿ.ಪಿ.ಇ. ಪ್ರಸ್ತಾವನೆಗಳನ್ನು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ ಇವರಿಗೆ ಕಳುಹಿಸಿವುದು.
• ಶಿಕ್ಷಣ ಕೋರ್ಸ ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಎನ್.ಸಿ.ಟಿ.ಇ. ನಿಯಮಾವಳಿಗಳ ಪ್ರಕಾರ ನೀರಪೇಕ್ಷಣಾ ಪ್ರಮಾಣ ಪತ್ರ ನೀಡುವುದು.
• ಸಿ.ಡಿ.ಸಿ. ವಿಭಾಗವು ಯು.ಜಿ.ಸಿ, ಎ.ಐ.ಸಿ.ಟಿ.ಇ, ಎನ್.ಸಿ.ಟಿ.ಇ. ಮತ್ತು ಕರ್ನಾಟಕ ಸರಕಾರ ಇವರು ಸಲಹೆ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವುದು.

Top